ದೇವರ ಕಾಣಲು

ದೇವರ ಕಾಣಲು ಹೋದವರಿದ್ದಾರೆ ಕಾಡುಬೆಟ್ಟಗಳ ಹಾದು
ಕಾಡ ಕಾಣಲಿಲ್ಲ ಬೆಟ್ಟವ ಕಾಣಲಿಲ್ಲ
ದೇವರ ಕಾಣಲಿಲ್ಲ

ಮರವ ಕಾಣದೆ ಕಾಡ ಕಾಣುವುದು
ಬಯಲ ಕಾಣದೆ ಬೆಟ್ಟವ ಕಾಣುವುದು
ಎಂತೊ ಮನುಷ್ಯ
ಮನುಷ್ಯರ ಕಾಣದ ದೇವರ ಕಾಣುವುದು?

ಪಾಪವ ನೀಗಲು ಹೋದವರಿದ್ದಾರೆ ಪುಣ್ಯ ಕ್ಷೇತ್ರಗಳಿಗೆ
ಅರ್ಘ್ಯ ನೀಡಿದರು ಕಾಸು ನೀಡಿದರು
ಪಾಪ ನೀಗಲಿಲ್ಲ

ಅಹಂಕಾರ ನೀಗದೆ ಮಮಕಾರ ಗಳಿಸುವುದು
ಸ್ವಾರ್ಥ ನೀಗದೆ ಪ್ರೀತಿ ಗಳಿಸುವುದು
ಎಂತೊ ಮನುಷ್ಯ
ಪಾಪ ನೀಗದೆ ಪುಣ್ಯವ ಗಳಿಸುವುದು ?

ಅರಿವು ಗಳಿಸಲು ಹೋದವರಿದ್ದಾರೆ ದೇಶವಿದೇಶಗಳಿಗೆ
ಊರು ಸುತ್ತಿದರು ಮೇರು ಹತ್ತಿದರು
ಅರಿವು ಲಭಿಸಲಿಲ್ಲ

ಹುಟ್ಟೂರು ಕೇರಿಗಳನೆ ಸುತ್ತದವರು ಎಲ್ಲಿ ಹೋದರೆ ಏನು
ಕಾಯಕವಿಲ್ಲದೆ ಕೈಲಾಸ ಎಟುಕುವುದು
ಎಂತೊ ಮನುಷ್ಯ
ಸ್ಥಾವರ ಮರೆತವ ಜಂಗಮನಾಗುವುದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೬
Next post ಮಾತೇ ಜ್ಯೋತಿರ್ಲಿಂಗ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys